‘ಆರ್ ಎಕ್ಸ್ ಸೂರಿ’ನಾಳೆಯಿಂದ ತೆರೆಗೆ
Posted date: 03 Thu, Sep 2015 – 09:59:08 AM

ನಿರ್ದೇಶಕ ಶ್ರೀಜೆ ಚೊಚ್ಚಲ ಪ್ರಯತ್ನದಲ್ಲಿಯೇ ಭೂಗತ ಲೋಕದ ಒಳಸುಳಿಗಳಿಗೆ ಕೈ ಹಾಕಿರುವ ಸಿನಿಮಾ ‘ಆರ್ ಎಕ್ಸ್ ಸೂರಿ’. ಕಣ್ಣೆದುರು ನಡೆದ ಘಟನೆಯೊಂದರ ಎಳೆಯಿಟ್ಟುಕೊಂಡು ಹೊಸೆದಿರುವ ಗಟ್ಟಿ ಕಥಾ ಹಂದರದ ಈ ಚಿತ್ರ ಸುರೇಶ್ ಆರ್ಟ್ಸ್ ಪ್ರೊಡಕ್ಷನ್ ಮೂಲಕ ಮೂಡಿ ಬಂದಿದ್ದು, ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.
ಇದು ನಿರ್ಮಾಪಕ ಕೆ ಎ ಸುರೇಶ್‌ರ ನಾಲಕ್ಕನೇ ಚಿತ್ರವೂ ಹೌದು. ನಿರ್ದೇಶಕ ಶ್ರೀಜೆ ಹುಟ್ಟಿ ಬೆಳೆದ ಏರಿಯಾ ಅವಲಹಳ್ಳಿಯ ವಿನೋದ ಕಾಲೋನಿಯಲ್ಲಿ ೨೦೦೮ ಏಪ್ರಿಲ್ ೪ರಂದು ಒಂದು ಘಟನೆ ನಡೆದಿತ್ತು. ಅದೇ ಘಟನೆಗೆ ಅನೇಕ ವಿಚಾರ ಬೆರಸಿದ ಶ್ರೀಜೆ ಒಂದು ಖಡಕ್ ಚಿತ್ರಕಥೆ ಮಾಡಿಕೊಂಡಿದ್ದರು.
ಹಾಗೊಂದು ಖಡಕ್ ಕಥೆ ರೆಡಿ ಮಾಡಿಕೊಂಡ ಶ್ರೀಜೆ, ಅದೇ ಸ್ಥಳಗಳಲ್ಲಿ ೨೮ ದಿವಸಗಳ ಕಾಲ ‘ಆರ್ ಎಕ್ಸ್ ಸೂರಿ’ ಸಿನಿಮಾಕ್ಕೆ ಚಿತ್ರೀಕರಣ ಮಾಡಿದ್ದಾರೆ. ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿರುವ ೫ ಹಾಡುಗಳಲ್ಲಿ ಎರಡು ಹಾಡುಗಳನ್ನು ನಿರ್ದೇಶಕರೇ ಬರೆದಿದ್ದಾರೆ. ಒಂದು ಹಾಡನ್ನು ಶಂಕರ್ ನಾಗ್ ಅವರ ‘ಹೊಸ ಜೀವನ’ ಚಿತ್ರದಿಂದ ಎರವಲು ಪಡೆಯಲಾಗಿದೆ, ರೌಡಿಗಳ ಬಗ್ಗೆ ಬರೆಯಲಾಗಿರುವ ಹಾಡೊಂದನ್ನು ಡಾ ಕೆ ಜೆ ಯೇಸುದಾಸ್ ಅವರು ಹಾಡಿರುವುದು ವಿಶೇಷ.
ದುನಿಯಾ ವಿಜಯ್ ನಾಯಕನಾಗಿರುವ ಈ ಚಿತ್ರದಲ್ಲಿ ರೋಚಕ ಸಾಹಸ ಸನ್ನಿವೇಶಗಳು ಯಥೇಚ್ಚವಾಗಿವೆಯಂತೆ. ಗುಜರಾತ್ ಮೂಲದ ಆಕಾಂಕ್ಷ ಕನ್ನಡ ಕಲಿತು ಮಾತನಾಡಿದ್ದಾರೆ. ರವಿಶಂಕರ್, ಬುಲೆಟ್ ಪ್ರಕಾಶ, ಸಾಧು ಕೋಕಿಲ, ವಿನಯ ಪ್ರಸಾದ್, ಅವಿನಾಶ್, ರಾಜೀವ್, ಪ್ರಶಾಂತ್ ಸಿದ್ದಿ, ದೇವ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಐದು ಸಾಹಸ ದೃಶ್ಯಗಳನ್ನು ಡಿಫರೆಂಟ್ ಡ್ಯಾನಿ ಹಾಗೂ ವಿನೋದ್ ನಿರ್ವಹಿಸಿದ್ದಾರೆ. ಕಲೈ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಎಚ್ ಸಿ ವೇಣು ಛಾಯಾಗ್ರಹಣ ಮಾಡಿದ್ದಾರೆ..

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed